ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಚಲಿಸುವ ರೈಲು ಮತ್ತು ಶ್ರವಣಬೆಳಗೊಳ
ಜನವರಿ ೨೬ ಗಣರಾಜ್ಯೋತ್ಸವ ದಿನದ ಬೆಳಗ್ಗೆ ೭:೫೦ ಕ್ಕೆ ಸೊಲ್ಲಾಪುರ - ಹಾಸನ ಎಕ್ಸ್ಪ್ರೆಸ್ ರೈಲಿನಲ್ಲಿ ಯಶವಂತಪುರದಿಂದ ಹೋಗುವುದೆಂದು ನಾನು, ಸುಷ್ಮಾ, ಸಿದ್ದು ಶನಿವಾರ ಸಂಜೆ ನಿರ್ಧಾರ ಮಾಡಿದೆವು. ನಾನು ಭಾನುವಾರ ಬೆಳಗ್ಗೆ ೬:೧೫ ಕ್ಕೆ ಬಿಟಿಮ್ ನಿಂದ ಹೊರಡಬೇಕೆಂದುಕೊಂಡರೂ, ಹೊರಡೊ ಅಶ್ಟರಲ್ಲಿ ೬:೪೦ ಆಗಿತ್ತು. ೭ ಗಂಟೆಗೆ ಬನಶಂಕರಿ ಸ್ಟಾಪ್ ನಲ್ಲಿ ಇಳಿದು ಮೆಟ್ರೊ ನಿಲ್ದಾಣಕ್ಕೆ ಅವಸರವಾಗಿ ನಡೆದುಕೊಂಡು ಬಂದು ಪ್ಲಾಟ್ ಫಾರಂ ತಲುಪಿದೆ. ಆದರೆ ಅಷ್ಟರಲ್ಲಾಗಲೇ ರೈಲು...
-
ಕೃತಿ, ನನ್ನವಳು!
ಕೃತಿ, ನನ್ನವಳ ಹೆಸರು. ಜೀವನದಲ್ಲಿ ಮೊದಲೇ ಲಂಗು ಲಗಾಮು ಇಲ್ಲದೆ, ಹುಚ್ಚು ಹುಚ್ಚಾಗಿ ಆಡ್ತಾ ಇದ್ದ ನಂಗೆ ರೆಕ್ಕೆಯನ್ನ ಕಟ್ಟಿ ಇನ್ನಷ್ಟು ಹುಚ್ಚಾಟಿಕೆಗೆ ಕಾರಣವಾದವಳು ಅವಳು. ಜೀವನದಲ್ಲಿ, ನನ್ನಂಥ ದಾರಿ ತಪ್ಪಿದ ಮಕ್ಕಳನ್ನ ಸರಿ ದಾರಿಗೆ ತರಲೆಂದೆ ಎಷ್ಟೋ ಜನ, ತಂದೆ ತಾಯಿಯರಿಗೆ ಕೊಡೋ ಬಿಟ್ಟಿ ಸಲಹೆಗಳಲ್ಲಿ ಒಂದು, "ನಿಮ್ಮ ಮಗನಿಗೆ ಮೊದಲು ಮದುವೆ ಮಾಡಿಬಿಡಿ" ಅನ್ನೋದು.ಆದ್ರೆ ನಮ್ಮ ಮನೆಯವರೇನಾದ್ರು ಇಂಥ ಸಲಹೆ ತೆಗೆದುಕೊಂಡೇ ನನ್ನ ಮದುವೆ ಮಡಿದ್ದಾಗಿದ್ರೆ, ಈಗ...
-
ಬೆಳಗ್ಗೆ ಬೆಳಗ್ಗೆ ಎಣ್ಣೇನಾ?
ಅದೆಷ್ಟೋ ಆಸೆಗಳನ್ನ ಹೊತ್ತು ಐಟಿ ಮೆಟ್ಟಿಲೇರಿದ ಕಾಲವದು. ಏರಿದ ಕೆಲವೇ ತಿಂಗಳುಗಳಿಗೆ ಅದರ ಸಪ್ಪೆತನವು ಮನದಟ್ಟಾಗಿತ್ತು. ಎಲ್ಲರೂ ತಮ್ಮ ಆಸೆ ಆಕಾಂಕ್ಷೆಗಳ ಪರಾಮರ್ಶೆ ಮಾಡೋದಕ್ಕೆ ಶುರುಮಾಡಿದ್ದು ಆಗಲೇ. ನಾನು event management ಮಾಡಲು ಕೈ ಹಾಕಿ, ಅದನ್ನ ಮುನ್ನಡೆಸೋ ಧೈರ್ಯವಾಗದೆ ಅದರ ಆಲೋಚನೆಯನ್ನೆ ಸಂಪೂರ್ಣ ಕೈಬಿಟ್ಟಿದ್ದೂ ಹೌದು. ಅದೇ ಸಮಯದಲ್ಲಿ ನಡೆದ ಘಟನೇ ಇದು. ಆದರ್ಶ್, ಮೇಲೆ ಹೇಳಿದ ಹಾಗೆಯೇ ಅವನು ತನ್ನದೇ ಆದ ಆಸೆಯೊಂದನ್ನು ಹೊತ್ತಿದ್ದ, ವ್ಯವಸಾಯ ಮಾಡಬೇಕು...
-
ಬೋಡು ತಲೆಯ ಹುಡುಗ
ಮಳೆಗಾಲ, ಸೆಮಿಸ್ಟರ್ ಪರಿಕ್ಷೆಗಳನ್ನೆಲ್ಲ ಮುಗಿಸಿದ್ದ ಸಮಯ. ಅಷ್ಟರಲ್ಲಿ ಆಗ್ಲೆ ಪ್ರತಿ ಸೆಮಿಸ್ಟರ್ ಗೆ ಒಂದರಂತೆ ಒಂದು ಟ್ರೆಕ್ ಮಾಡ್ಲೇಬೇಕು ಅನ್ನೊ, ಕಟ್ಟುಪಾಡೆ ಇಲ್ಲದ ಒಂದು ಕಟ್ಟುಪಾಡಿಗೆ, ನಮ್ಮನ್ನ ನಾವು ಸಿಕ್ಕಿಸಿಕೊಂಡಿದ್ವಿ. ಅದರಂತೆ ಪರಿಕ್ಷೆಯ ನಂತರ ಹೋಗೋದಕ್ಕೆ, ಪರಿಕ್ಷೆಯ ಮುಂಚೆಯೇ ಒಂದು ಯೋಜನೆಯನ್ನ ಹಾಕಿಯು ಆಗಿತ್ತು. ನಾಲ್ಕನೆ ಸೆಮಿಸ್ಟರ್ ಅಲ್ಲಿ ಮೊದಲುಗೊಂಡ ನಮ್ಮ ಇಂಥ ಸಾಹಸಗಳು ಆರನೇ ಸೆಮಿಸ್ಟರ್ ಬರೋ ಹೊತ್ತಿಗೆ ಒಂದು ಮಟ್ಟಿಗೆ ಮೆಚ್ಯುರ್ ಆಗೋದಕ್ಕೆ ಶುರುವಾಗಿತ್ತು. ರೈಲಿನ ಜನರಲ್...
-
ಮಲೆಯ ಮಾರುತ
ಮೆಲ್ಲ ನಿನ್ನ ನಡಿಗೆಯ, ದೂರದಿಂದ ನೋಡುತ, ಮೋಡಗಳ ತಾಕುವ ಬೆಟ್ಟದಿಂದ ಬಂದಿದೆ, ಚಂದ ಮಲೆಯ ಮಾರುತ. ಬವಣೆಗಳು ಹಗುರವಾಗಿವೆ ಈಗ ನೀ ನನ್ನ ಸೋಕಲು, ಭಾವನೆಗಳೇ ಬೆರಗಾಗಿವೆ ನೀ ನನ್ನ ತಬ್ಬಲು, ನನ್ನ ಸುತ್ತಿ ನೀ ನಿಂತಾಗ ಜಗವು ನಿಂತಿದೆ ನೋಡುತ, ಭುವಿಯ ಸುತ್ತಿ ಬಂದು ನನ್ನದಾಗಿದೆ ಈಗ, ಚಂದ ಮಲೆಯ ಮಾರುತ! ಇರುಳು ತಂಪು ಸೂಸುತ ಚುಕ್ಕಿ ಬೆಳಕ ಚೆಲ್ಲುತ ಕಾಡನ್ನೆಲ್ಲ ಆವರಿಸಿದೆ ಈಗ ತಂಪಾದ ಮಲೆಯ ಮಾರುತ,...